ಭೂತ

ಕಾಡುತಿದೆ ಭೂತ
ಅನೇಕ ರೂಪಗಳಲ್ಲಿ
ಅನೇಕ ಪರಿಗಳಲ್ಲಿ

ಮನೆ ಬಾಗಿಲು ಕಿಟಕಿಗಳ
ಕೊನೆಗೆ ಕೋಣೆ, ಮೆಟ್ಟಲುಗಳ
ದಿಕ್ಕ ದೆಸೆಗಳ ನಿರ್ಧರಿಸುತ್ತದೆ

ಸಾಯುವ ಹುಟ್ಟುವ
ಕ್ಷಣ ಗಣನೆಗಳ ಗುಣುಗುಣಿಸಿ
ಪೂಜೆ ಬಲಿದಾನಗಳ ಮಾಡಿಸುತ್ತದೆ
ಗಂಡು ಹೆಣ್ಣು ಕೂಡಿಸಲು
ಓಡಿ ಹೋದ ದಿಕ್ಕು
ಮುಹೂರ್ತಗಳ ಗುರುತಿಸುತ್ತದೆ

ಕೆಲಸ ಮಾಡಲು ಕೆಲಸಕ್ಕೆ ಸೇರಲು
ಕೆಲಸ ಶುರು ಮಾಡಲು
ಎಲ್ಲ ಸಮಯಗಳಲ್ಲಿ
ಭೂತ ಆಳುತ್ತದೆ

ಹಲ್ಲಿಗಳ ಬೀಳಿಸುತ್ತದೆ
ಬೆಕ್ಕುಗಳ ಅಡ್ಡ ಬರಿಸುತ್ತದೆ
ಬಿಕ್ಕಳಿಕೆ ಆಕಳಿಕೆಗಳಲ್ಲೂ
ಧ್ವನಿ ಮಾಡುತ್ತದೆ

ಸೀನುಗಳ ಸಂಖ್ಯೆಗಳಿಗೆ ಅರ್ಥ ಕೊಡುತ್ತದೆ
ಕಣ್ಣು ಅದುರಿದರೂ ಬೆದರುತ್ತದೆ ಜೀವ
ಗುಡಿಗಳ ಕಟ್ಟಿಸುತ್ತದೆ ಮೂರ್ತಿಗಳ ಸ್ಥಾಪಿಸುತ್ತದೆ
ಮಂತ್ರ ತಂತ್ರ ಪುರಾಣಗಳ ಕಟ್ಟುತ್ತದೆ
ಷೋಡಶೋಪಚಾರಗಳ ನೇಮಿಸುತ್ತದೆ
ಮೌಢ್ಯದ ಬಂಡವಾಳ ವ್ಯಾಪಾರದ ಸರಕು

ಭಕ್ತರ ಸಾಲು ಸಾಲು
ಅಡ್ಡ ಬೀಳುತ್ತವೆ ತಲೆ ಬೋಳಿಸಿಕೊಳ್ಳುತ್ತವೆ
ದಿಂಡುರುಳಿ ದೇಹ ದಂಡಿಸುತ್ತವೆ
ಕಾಣದ ಕೈವಾಡಕ್ಕೆ ಶರಣಾಗುತ್ತವೆ

ಕಾವಿ ಗಡ್ಡ ನಾಮ ವರದ ಹಸ್ತಗಳ ಮುಂದೆ
ಸಾವಿರ ಸಾವಿರ ಸನ್ನಿಬಡಕ ತಲೆಗಳು
ಬಾಗಿ ನೆಲ ಮುಟ್ಟುತವೆ

ಅವರ ನೋಡಿ ಇವರು ಮತ್ತಿವರ ನೋಡಿ ಅವರು
ಎಲ್ಲರೂ ನೆಲಕಪ್ಪಚ್ಚಿ ಬಕ್ಕ ಬಾರಲು
ಬುದ್ದಿ ಜೀವಿಗಳು ಕೂಡಾ ಅರಲು ಬರಲು

ವರ್ತಮಾನದ ದೀಪ ಭವಿಷ್ಯದ ತಾಪ
ತಣ್ಣಗಾಗಿ ಭೂತದ ಪೆಡಂಭೂತ ತೆಕ್ಕೆಯೊಳಗೆ
ನಲುಗುತ್ತದೆ ಮುಲುಮುಲುಗಿ

*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಮೆರಿಕಾ
Next post ವಿ-ನಿಯೋಗ

ಸಣ್ಣ ಕತೆ

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

cheap jordans|wholesale air max|wholesale jordans|wholesale jewelry|wholesale jerseys